ಜಿಎಸ್ ಟಿ ಕೇವಲ ಅರ್ಥವ್ಯವಸ್ಥೆಯ ಕ್ರಾಂತಿಯಷ್ಟೇ ಅಲ್ಲದೇ ಲೋಕತಂತ್ರ ವ್ಯವಸ್ಥೆಯ ದೊಡ್ಡ ಕ್ರಾಂತಿಯೂ ಆಗಿದೆ. ಜಿಎಸ್ ಟಿ ಜಾರಿ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದ್ದು, ಭಾರತ ಹೊಸ ದಿಕ್ಕಿನತ್ತ ಸಾಗಲಿದೆ. ಸ್ವಾತಂತ್ರ್ಯ ಬಂದಾಗ ಸಂಸತ್ ನಲ್ಲಿ ಮಧ್ಯರಾತ್ರಿ ವಿಶೇಷ ಅಧಿವೇಶನ ನಡೆದಿತ್ತು, ಸ್ವಾತಂತ್ರ್ಯ ನಂತರ ವಲ್ಲಭ ಭಾಯ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸಿದ್ದರು, ಈಗ ಜಿಎಸ್ ಟಿಯಿಂದ ಆರ್ಥಿಕ ಸ್ವಾತಂತ್ರ್ಯ ದೊರೆತಿದ್ದು, ಜಿಎಸ್ ಟಿ ಆರ್ಥಿಕ ಏಕೀಕರಣದ ಮಹತ್ವದ ಘಟ್ಟವಾಗಿದೆ ಎಂದಿದ್ದಾರೆ.