ಉ.ಪ್ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಠೇವಣಿ ಉಳಿದರೆ ಅದೇ ದೊಡ್ಡ ಸಾಧನೆ: ಆಜಂ ಖಾನ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ನುಕ್ಕಡ್ ನೇತಾ (ಮೂಲೆಯಲ್ಲಿ ಸಭೆ ನಡೆಸುವ ನಾಯಕ) ಎಂದು ಟೀಕಿಸಿದ್ದಾರೆ.
ಆಜಂ ಖಾನ್
ಆಜಂ ಖಾನ್
ರಾಮ್ ಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ನುಕ್ಕಡ್ ನೇತಾ (ಮೂಲೆಯಲ್ಲಿ ಸಭೆ ನಡೆಸುವ ನಾಯಕ) ಎಂದು ಟೀಕಿಸಿದ್ದಾರೆ. 
ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ಬಗ್ಗೆ ಟೀಕೆ ಮಾಡಿರುವ ಉತ್ತರ ಪ್ರದೇಶ ಸಚಿವ ಆಜಂ ಖಾನ್ ಇಡಿ ಕೇಂದ್ರ ಸರ್ಕಾರವೇ ವಾರಾಣಸಿಗೆ ಬಂದಿದ್ದು, ವಾರಾಣಸಿಯನ್ನು ದೇಶದ ರಾಜಧಾನಿಯನ್ನಾಗಿ ಬದಲಾವಣೆ ಮಾಡಿದ್ದಾರೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಣ್ಣ ಪ್ರದೇಶವೊಂದರಲ್ಲಿ ಸಭೆ ನಡೆಸುವ ನಾಯಕರಾಗಿದ್ದಾರೆ ಎಂಬ ಅರ್ಥ ಬರುವಂತೆ ನುಕ್ಕಡ್ ನೇತಾ ಎಂದು ಲೇವಡಿ ಮಾಡಿರುವ ಆಜಂ ಖಾನ್ ಬಿಜೆಪಿಗೆ ಒಂದೇ ಒಂದೂ ಸ್ಥಾನ ಗೆಲ್ಲದಿದ್ದರೂ ಅಭ್ಯರ್ಥಿಗಳ ಠೇವಣಿ ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆ ಎಂದಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಕೊನೆಯ ಹಂತದ ಮತದಾನ ನಡೆಯಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅಂತಿಮ ಹಂತದ ಪ್ರಚಾರ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com