ವಾರಾಣಸಿಯಲ್ಲಿ ಪ್ರಧಾನಿ ಮೋದಿ ಅವರ ರೋಡ್ ಶೋ ಬಗ್ಗೆ ಟೀಕೆ ಮಾಡಿರುವ ಉತ್ತರ ಪ್ರದೇಶ ಸಚಿವ ಆಜಂ ಖಾನ್ ಇಡಿ ಕೇಂದ್ರ ಸರ್ಕಾರವೇ ವಾರಾಣಸಿಗೆ ಬಂದಿದ್ದು, ವಾರಾಣಸಿಯನ್ನು ದೇಶದ ರಾಜಧಾನಿಯನ್ನಾಗಿ ಬದಲಾವಣೆ ಮಾಡಿದ್ದಾರೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಣ್ಣ ಪ್ರದೇಶವೊಂದರಲ್ಲಿ ಸಭೆ ನಡೆಸುವ ನಾಯಕರಾಗಿದ್ದಾರೆ ಎಂಬ ಅರ್ಥ ಬರುವಂತೆ ನುಕ್ಕಡ್ ನೇತಾ ಎಂದು ಲೇವಡಿ ಮಾಡಿರುವ ಆಜಂ ಖಾನ್ ಬಿಜೆಪಿಗೆ ಒಂದೇ ಒಂದೂ ಸ್ಥಾನ ಗೆಲ್ಲದಿದ್ದರೂ ಅಭ್ಯರ್ಥಿಗಳ ಠೇವಣಿ ಉಳಿಸಿಕೊಂಡರೆ ಅದೇ ದೊಡ್ಡ ಸಾಧನೆ ಎಂದಿದ್ದಾರೆ.