ನವದೆಹಲಿ: ಉತ್ತರ ಪ್ರದೇಶದ ಲಖನೌ ನಲ್ಲಿ ಶಂಕಿತ ಐಎಸ್ಐಎಸ್ ಉಗ್ರನನ್ನು ಹತ್ಯೆ ಮಾಡಲಾದ ಎನ್ ಕೌಂಟರ್ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಖನೌ ಎನ್ ಕೌಂಟರ್ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವ ಎಲ್ಲಾ ಸಾಧ್ಯತೆಗಳಿಗೆ ಈ ಬಗ್ಗೆ ಸೂಚನೆ ಬಂದಿರುವುದಾಗಿ ಹಿರಿಯ ಅಧಿಕಾರಿ ಹೇಳಿದ್ದು, ಸೈಫುಲ್ಲಾ ನಡೆಸಿದ್ದರ ದಾಳಿಯ ಹಿಂದೆ ಮತ್ತಷ್ಟು ದೊಡ್ದ ಯೋಜನೆ, ಮತ್ತಷ್ಟು ಸಂಪರ್ಕಗಳಿರುವ ಸಾಧ್ಯತೆ ಇದೆ ಎಂದಿದ್ದಾರೆ.
12 ಗಂಟೆಗಳ ಕಾರ್ಯಾಚರಣೆ ಬಳಿಕ ಶಂಕಿತ ಐಎಸ್ಐಎಸ್ ಉಗ್ರ ಸೈಫುಲ್ಲಾ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.