ಪ್ರಕರಣ ಸಂಬಂಧ ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಶಂಕಿತ ಉಗ್ರ ಸೈಫುಲ್ಲಾನನ್ನು ಎಟಿಎಸ್ ಅಧಿಕಾರಿಗಳು ನಿನ್ನೆ ಲಖನೌನಲ್ಲಿ ಹತ್ಯೆ ಮಾಡಿದ್ದು, ಸೈಫುಲ್ಲಾ ಮೃತದೇಹ ಸ್ವೀಕಾರ ಕುರಿತಂತೆ ತಂದೆ ಸರ್ತಾಜ್ ಮೊಹಮ್ಮದ್ ಒಬ್ಬ ಭಾರತೀಯನಾಗಿ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಹೀಗಾಗಿ ನಾನು ಭಯೋತ್ಪಾದಕನ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವುದು ದೇಶ ಹೆಮ್ಮೆ ಪಡುವಂತಾ ವಿಷಯ. ಸರ್ತಾಜ್ ಅವರ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.