ಪಶ್ಚಿಮ ಬಂಗಾಳದ ಕರೀಂಪುರದ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಶಾಸಕಿ ಮಹುವಾ ಮೊಹಿತ್ರಾ ಅವರು ಅಲಿಪೋರಾದ ಕೋರ್ಟ್ ನಲ್ಲಿ 2017ರ ಜನವರಿ 4ರಂದು ದೂರು ನೀಡಿದ್ದರು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಬಾಬುಲ್ ಸುಪ್ರಿಯೋಗೆ ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ಸತತ ಮೂರು ಬಾರಿಯೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಸುಪ್ರಿಯೋ ವಿರುದ್ಧ ವಾರೆಂಟ್ ಜಾರಿ ಮಾಡಿದೆ.