ರೋಹಿತ್ ವೇಮುಲ ಅವರ ಚಳವಳಿಯನ್ನು ಮುಂದುವರಿಸಿದ್ದ ಜೆ.ಮುತ್ತು ಕೃಷ್ಣನ್

ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿ ಮುತ್ತು ಕೃಷ್ಣನ್ ಈ ಹಿಂದೆ...
ಜೆ.ಮುತ್ತು ಕೃಷ್ಣನ್
ಜೆ.ಮುತ್ತು ಕೃಷ್ಣನ್
Updated on
ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಪಿಎಚ್ ಡಿ ವಿದ್ಯಾರ್ಥಿ ಜೆ. ಮುತ್ತು ಕೃಷ್ಣನ್ ಈ ಹಿಂದೆ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರು.
ರೋಹಿತ್ ವೇಮುಲ ಆತ್ಮಹತ್ಯೆಯ ನಂತರ ವಿಶ್ವ ವಿದ್ಯಾಲಯದ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದರು. 
27 ವರ್ಷದ ಮುತ್ತು ಕೃಷ್ಣನ್ ತಮಿಳುನಾಡಿನ ಸೇಲಂ ಜಿಲ್ಲೆಯನವರಾಗಿದ್ದು ಎ.ಫಿಲ್ ಪದವಿಯನ್ನು 2015ರಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದರು. ನಂತರ ಪಿಎಚ್ ಡಿಗೆ ದೆಹಲಿಯ ಜವಹರಲಾಲ್ ನೆಹರೂ ವಿಶ್ವ ವಿದ್ಯಾಲಯ ಸೇರಿದ್ದರು.
ವಿಶ್ವ ವಿದ್ಯಾಲಯದ ಜೆಲುಮ್ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಮುತ್ತು ಕೃಷ್ಣನ್ ನಿನ್ನೆ ತನ್ನ ಸ್ನೇಹಿತನ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ರೋಹಿತ್ ವೇಮುಲ ಕುಟುಂಬದವರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಮುತ್ತು ಕೃಷ್ಣ ಅವರನ್ನು ಗುರಿಯಾಗಿರಿಸಲಾಗಿತ್ತು. ಖಿನ್ನತೆಗೊಳಗಾಗಿ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಆರೋಪಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com