ಉತ್ತರ ಪ್ರದೇಶದಲ್ಲಿ ಸದ್ಯ ರೋಮಿಯೊ ನಿಗ್ರಹ ಪಡೆ(anti-Romeo squad) ಭಾರಿ ಸುದ್ದಿ ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ತೇಜಸ್ವಿ ಯಾದವ್, ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ ಮತ್ತು ಸಮಾಜಕ್ಕೆ ಮಾರಕ. ಜನರನ್ನು ದಾರಿ ತಪ್ಪಿಸುವ ಬದಲು ಮದ್ಯ ನಿಗ್ರಹ ಪಡೆ(anti-liquor squad) ರಚಿಸಲಿ ಎಂದು ಹೇಳಿದ್ದಾರೆ.