ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ

ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿದೆ.
ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ
ವಂದೇ ಮಾತರಂ ಹಾಡಲು ನಕಾರ: ಸಭೆಯಲ್ಲಿ ಭಾಗವಹಿಸದಂತೆ ಮೀರತ್ ಪುರಸಭೆ ಸದಸ್ಯರಿಗೆ ನಿಷೇಧ
Updated on
ಮೀರತ್: ವಂದೇ ಮಾತರಂ ಹಾಡಲು ನಿರಾಕರಿಸಿದ ಮೀರತ್ ಪುರಸಭೆ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿದೆ. 
ರಾಷ್ಟ್ರಗೀತೆಗೆ ಸಂಬಂಧಿಸಿದಂತೆ ಆಡಳಿತಾರೂಢ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ವೇಳೆ ಕೆಲವು ಸದಸ್ಯರು ವಂದೇ ಮಾತರಂ ಹಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸದಂತೆ ನಿಷೇಧ ವಿಧಿಸಲಾಗಿರುವ ನಿರ್ಣಯವನ್ನು ಮೇಯರ್ ಹರಿಕಾಂತ್ ಅಹ್ಲುವಾಲಿಯಾ ಪ್ರಕಟಿಸಿದ್ದಾರೆ. 
ವಂದೇ ಮಾತರಂ ಗೀತೆಯನ್ನು ಹಾಡಲು 7 ಕಾರ್ಪೊರೇಟರ್ ಗಳು ನಿರಾಕರಿಸಿದ್ದು, ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಉಳಿದ ಸದಸ್ಯರುಗಳು ವಂದೇ ಮಾತರಂ ಹಾಡಲು ಪ್ರಾರಂಭಿಸುತ್ತಿದ್ದಂತೆಯೇ 7 ಸದಸ್ಯರು ಸಭೆಯಿಂದ ಹೊರ ನಡೆದಿದ್ದಾರೆ. 
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಮೇಯರ್ ಹರಿಕಾಂತ್ ಅಹ್ಲುವಾಲಿಯಾ ರಾಷ್ಟ್ರಗೀತೆ ಹಾಡುವಂತೆ ಎಲ್ಲಾ ಸದಸ್ಯರಿಗೂ ಸೂಚನೆ ನೀಡಿದರು. ಇದೇ ವೇಳೆಯಲ್ಲಿ ಬಿಜೆಪಿ ಕೌನ್ಸಿಲರ್ ಗಳು ಹಿಂದೂಸ್ಥಾನದಲ್ಲಿರಬೇಕಾದರೆ ವಂದೇ ಮಾತರಂ ಹೇಳಬೇಕು ಎಂದು ಘೋಷಣೆ ಕೂಗಿದ್ದರು. ಈ ಬೆನಲ್ಲೇ  ವಿರೋಧಪಕ್ಷದ ಕೆಲವು ಸದಸ್ಯರು ಸಭೆಯಿಂದ ಹೊರನಡೆದಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com