"ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ, ಯೋಧರ ಶಿರಚ್ಛೇಧ ಮಾಡಿ ಅಂಗಾಂಗಗಳನ್ನು ಕತ್ತರಿಸಿರುವ ಆರೋಪವನ್ನು ನಿರಾಕರಿಸಿದೆ" ಎಂದು ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಭಾರತದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ಎಕೆ ಭಟ್ ಅವರೊಂದಿಗೆ ಮಾತನಾಡಿರುವ ಪಾಕಿಸ್ತಾನ ಡಿಜಿಎಂಒ ಸಾಹಿರ್ ಶಂಷಾದ್ ಮಿರ್ಜಾ, "ಪಾಕಿಸ್ತಾನ ಕದನ ವಿರಾಮವನ್ನೂ ಉಲ್ಲಂಘಿಸಿಲ್ಲ, ಭಾರತ ಹೇಳುತ್ತಿರುವ ಪ್ರದೇಶದಲ್ಲಿ ಪಾಕಿಸ್ತಾನದ ಸೇನಾ ಪಡೆ ಎಲ್ಒಸಿಯನ್ನೂ ದಾಟಿಲ್ಲ ಎಂದಿದ್ದಾರೆ.