ಅಮಾನತುಲ್ಲಾ ಖಾನ್, ಅರವಿಂದ್ ಕೇಜ್ರಿವಾಲ್ ಅಥವಾ ಮನಿಶ್ ಸಿಸೋಡಿಯಾ ವಿರುದ್ಧ ಈ ರೀತಿ ಹೇಳಿದ್ದರೆ 10 ನಿಮಿಷದಲ್ಲೇ ಪಕ್ಷದಿಂದ ಉಚ್ಚಾಟನೆಯಾಗುತ್ತಿದ್ದರು ಎಂದು ಕುಮಾರ್ ವಿಶ್ವಾಸ್ ಹೇಳಿದ್ದಾರೆ. ಕುಮಾರ್ ವಿಶ್ವಾಸ್ ವಿರುದ್ಧ ಆರೋಪ ಮಾಡಿದ್ದ ಅಮಾನತುಲ್ಲಾ ಖಾನ್, ಕುಮಾರ್ ವಿಶ್ವಾಸ್ ಆಮ್ ಆದ್ಮಿ ಪಕ್ಷದ ಸಂಚಾಲಕರಾಗಲು ಬಯಸಿದ್ದಾರೆ. ಒಂದು ವೇಳೆ ಆ ಹುದ್ದೆ ಸಿಗದೇ ಇದ್ದಲ್ಲಿ ತಮ್ಮೊಂದಿಗೆ ಕೆಲವು ಆಪ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಸೇರಲು ಚಿಂತನೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.