ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಹಾಕಿದರೆ ರೂ. 1 ಲಕ್ಷ ದಂಡ: ಎನ್‌ಜಿಟಿ

ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿನ ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 1 ಲಕ್ಷ ದಂಡ ವಿಧಿಸಲಿದೆ...
ರಾಮಗಂಗಾ
ರಾಮಗಂಗಾ
Updated on
ನವದೆಹಲಿ: ಉತ್ತರಪ್ರದೇಶದ ಮೊರಾದಾಬಾದ್ ನಲ್ಲಿನ ರಾಮಗಂಗಾ ನದಿ ದಂಡೆಯಲ್ಲಿ ತ್ಯಾಜ್ಯ ಎಸೆಯುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) 1 ಲಕ್ಷ ದಂಡ ವಿಧಿಸಲಿದೆ. 
ರಾಮಗಂಗಾ ನದಿ ದಂಡೆಯಲ್ಲಿ ಇ-ತ್ಯಾಜ್ಯಗಳನ್ನು ಎಸೆಯುವವರು ಪರಿಸರ ಪರಿಹಾರ ರೂಪದಲ್ಲಿ 1 ಲಕ್ಷ ರುಪಾಯಿ ದಂಡ ತೆರಬೇಕಾದಿತು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷ ಜಸ್ಟಿಸ್ ಸ್ವತಂತ್ರ ಕುಮಾರ್ ಹೇಳಿದ್ದಾರೆ. 
ಜಸ್ಟಿಸ್ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಸಂಬಂಧಿತ ಇಲಾಖಾ ಪ್ರತಿನಿಧಿಗಳ ಒಂದು ಸಮಿತಿಯನ್ನು ರಚಿಸಿ ರಾಮಗಂಗಾ ನದಿ ದಂಡೆಯಲ್ಲಿ ಗುಡ್ಡೆ ಹಾಕಲಾಗಿರುವ ಇ-ತ್ಯಾಜ್ಯಗಳನ್ನು ಕೂಡಲೇ ಖಾಲಿ ಮಾಡಿಸಿ ಎರಡು ವಾರಗಳ ಒಳಗೆ ವರದಿ ನೀಡುವಂತೆ ಆದೇಶಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com