ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪ್ರಸ್ತುತ ಮತ್ತೆ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿರುವ ಕಾಂಗ್ರೆಸ್, ಪಾಕಿಸ್ತಾನ ಜೊತೆಗಿನ ಭಾರತದ ಸಂಬಂಧ ಹದಗೆಡುತ್ತಿದೆ. ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಆಡಳಿತದಲ್ಲಿ ಇಷ್ಟೊಂದು ಹಿಂಸಾಚಾರ, ಗಲಭೆ ಕಂಡಿರಲಿಲ್ಲ. ಪ್ರವಾಸೋದ್ಯಮ ಕೂಡ ಪ್ರವರ್ಧಮಾನ ಕಂಡಿತ್ತು ಎಂದು ಹೇಳಿದೆ.