ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜಿಎಸ್ ಟಿ ಮಸೂದೆ ಮಂಡಿಸಿದ ನಂತರ ಚರ್ಚೆ ನಡೆಸಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಜಿಎಸ್ ಟಿ ಕಾಯ್ದೆಯಿಂದ ತೆರಿಗೆ ವ್ಯವಸ್ಥೆ ಮತ್ತಷ್ಟು ಸರಳಗೊಳ್ಳಲಿದ್ದು, ಉದ್ಯಮ ಸಮುದಾಯ ಸೇರಿದಂತೆ ಹಲವು ವರ್ಗದವರಿಗೆ ಸಹಕಾರಿಯಾಗಲಿದೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.