ಇಂದು ಗೃಹ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ನೀಡುತ್ತಿರುವ ಎರಡನೇ ಬಾರಿಯ ಎಚ್ಚರಿಕೆಯಾಗಿದೆ. ಇದಕ್ಕೂ ಮುಂದೆ ರಾಜಸ್ತಾನದ ಪಾಲಿಯಲ್ಲಿ ಇಂದು ಬೆಳಗ್ಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, 2016ರ ಸರ್ಜಿಕಲ್ ಸ್ಟ್ರೈಕ್ ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಸಂದೇಶವಾಗಿದ್ದು ಅಗತ್ಯಬಿದ್ದರೆ ಭಾರತ ಯಾವಾಗ ಬೇಕಾದರೂ ಗಡಿ ಭಾಗವನ್ನು ಹಾದು ಹೋಗಬಹುದು ಎಂದರು.