ಜಾಕಿರ್ ನಾಯ್ಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ದೇಶದ ಹಿತಾಸಕ್ತಿಗೆ ಪೂರಕ: ನ್ಯಾಯಮಂಡಳಿ

ಇಸ್ಲಾಂ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಶೇಷ ನ್ಯಾಯಮಂಡಳಿ ಎತ್ತಿ ಹಿಡಿದಿದೆ.
ಜಾಕಿರ್ ನಾಯ್ಕ್
ಜಾಕಿರ್ ನಾಯ್ಕ್
Updated on
ನವದೆಹಲಿ: ಇಸ್ಲಾಂ ಧರ್ಮದ ವಿವಾದಿತ ಧರ್ಮ ಪ್ರಚಾರಕ ಜಾಕಿರ್ ನಾಯ್ಕ್ ನ ಐಆರ್ ಎಫ್ ಸಂಸ್ಥೆಗೆ ನಿಷೇಧ ವಿಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿಶೇಷ ನ್ಯಾಯಮಂಡಳಿ ಎತ್ತಿ ಹಿಡಿದಿದೆ. 
ದೇಶದ ಹಿತಾಸಕ್ತಿ ದೃಷ್ಟಿಯಿಂದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಗೆ ನಿಷೇಧ ವಿಧಿಸಿರುವ ಕ್ರಮ ಸರಿಯಾಗಿದೆ ಎಂದು ನ್ಯಾ. ಸಂಗೀತಾ ಧೀಂಗ್ರ ಅವರಿದ್ದ ದೆಹಲಿ ಹೈಕೋರ್ಟ್ ನ ವಿಶೇಷ ನ್ಯಾಯಪೀಠ ಹೇಳಿದೆ. ಐಆರ್ ಎಫ್ ನಿಂದ ದೇಶದ ಭದ್ರತೆ, ಸಮಗ್ರತೆಗೆ ಧಕ್ಕೆ ಉಂಟಾಗುವ ಅಪಾಯ ಸೇರಿದಂತೆ ಹಲವು ಕಾರಣಗಳಿದ್ದು, ಐಆರ್ ಎಫ್ ನ್ನು ಅಕ್ರಮ ಸಂಘಟನೆ ಎಂದು ಘೋಷಿಸುವುದಕ್ಕೆ ಸೂಕ್ತ ಕಾರಣಗಳಿವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. 
2016  ರ ನವೆಂಬರ್ 17 ರಂದು ಕೇಂದ್ರ ಸರ್ಕಾರ ಐಆರ್ ಎಫ್ ವಿರುದ್ಧ 5 ವರ್ಷಗಳ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ಐಆರ್ ಎಫ್ ಭಾರತದ ಅಸ್ಮಿತೆಗೆ ಧಕ್ಕೆ ಉಂಟು ಮಾಡುತ್ತಿತ್ತು ಎಂಬುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರ ಐಆರ್ ಎಫ್ ನ ನಿಷೇಧಕ್ಕೆ ನೀಡಿರುವ ಕಾರಣಗಳು 1967 ರ ಯುಎಪಿಎ ಕಾಯ್ದೆಯ ಅಂಶಗಳಿಗೆ ಪೂರಕವಾಗಿರುವುದರಿಂದ ಸರ್ಕಾರದ ಕ್ರಮ ಸರಿ ಇದೆ ಎಂದು ನ್ಯಾಯಮಂಡಳಿ ಹೇಳಿದೆ.    

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com