ಲೋಕಸಭೆ-ವಿಧಾನಸಭೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಮೂಲಕ ರಾಜಕೀಯ ಸ್ಥಿರತೆ ತರುವ ನೀತಿ ಆಯೋಗದ ಪ್ರಸ್ತಾವನೆಯನ್ನು ಬಿಜೆಪಿ ನಾಯತ್ವ ಒಪ್ಪಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ವಿಸರ್ಜಿಸಲಿ, ಬಳಿಕ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳೊಂದಿಗೆ ಲೋಕಸಭೆಯ ಚುನಾವಣೆಯನ್ನೂ ನಡೆಸಲಿ ಇದರಿಂದ ಮೋದಿ ತಮ್ಮ ಸಾಮರ್ಥ್ಯ, ಜನಪ್ರಿಯತೆಯನ್ನೂ ಅರಿತುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.