ಚಿಟ್ ಫಂಡ್ ಹಗರಣ: ಟಿಎಂಸಿ ಸಂಸದ ಸುದೀಪ್ ಬಂಡೋಪಧ್ಯಾಯಗೆ ಜಾಮೀನು

ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುದೀಪ್ ಬಂಡೋಪಧ್ಯಾಯರಿಗೆ ಜಾಮೀನು ಸಿಕ್ಕಿದೆ...
ಸುದೀಪ್ ಬಂಡೋಪಧ್ಯಾಯ
ಸುದೀಪ್ ಬಂಡೋಪಧ್ಯಾಯ
ಭುವನೇಶ್ವರ್: ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಸುದೀಪ್ ಬಂಡೋಪಧ್ಯಾಯರಿಗೆ ಜಾಮೀನು ಸಿಕ್ಕಿದೆ. 
ಜಾಮೀನು ಅರ್ಜಿ ವಿಚಾರಣೆ ನಡೆಸಿದ ಒಡಿಶಾ ಹೈಕೋರ್ಟ್ ಬಂಡೋಪಧ್ಯಾಯರಿಗೆ ಜಾಮೀನು ಮಂಜೂರು ಮಾಡಿದ್ದು, ಪಾಸ್ ಪೋರ್ಟ್ ಮತ್ತು ಇಬ್ಬರ ಶ್ಯೂರಿಟಿಯೊಂದಿಗೆ 25 ಲಕ್ಷ ಠೇವಣಿ ಇಡುವಂತೆ ಕೋರ್ಟ್ ಸೂಚಿಸಿದೆ. 
ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣ ಸಂಬಂಧ ಕಳೆದ ಜನವರಿಯಲ್ಲಿ ಬಂಡೋಪಧ್ಯಾಯರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಇನ್ನು ಬಂಡೋಪಧ್ಯಾಯ ಅವರನ್ನು ಎಂಟು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಇದಕ್ಕೂ ಮುನ್ನ ಸಿಬಿಐ ಕೋರ್ಟ್ ಗೆ ಮನವಿ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com