ವಿಚಾರಣೆ ನಡೆಸುತ್ತಿರುವ ಸಾಂವಿಧಾನಿಕ ಪೀಠದ ನ್ಯಾ.ಜೆಎಸ್ ಖೇಹರ್ ನೇತೃತ್ವದ ಪಂಚಸದಸ್ಯ ಪೀಠ ತ್ರಿವಳಿ ತಲಾಖ್ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಕುರಾನ್ ನಲ್ಲಿ ತ್ರಿವಳಿ ತಲಾಖ್ ಬಗ್ಗೆ ಉಲ್ಲೇಖವಿಲ್ಲ, ಆದ್ದರಿಂದ ಅದು ಪಾಪ ಹಾಗೂ ಕೆಟ್ಟ ಪದ್ಧತಿಯಾಗಿದ್ದು, ಸುಪ್ರೀಂ ಕೋರ್ಟ್ ಇದನ್ನು ಪರಿಶೀಲನೆ ಮಾಡಬಾರದು ಎಂದು ವಿಚಾರಣೆ ವೇಳೆ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದ ಮಂಡಿಸಿತ್ತು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್, ತಲಾಖ್ ನ್ನು ಪಾಪ ಕೃತ್ಯ ಎನ್ನುತೀರಿ, ಹಾಗೆಯೇ ತಲಾಖ್ ನ್ನು 1,400 ವರ್ಷಗಳಿಂದ ನಡೆದುಬಂದಿರುವ ನಂಬಿಕೆ ಎನ್ನುತ್ತೀರಿ ಪಾಪಕೃತ್ಯ ಹೇಗೆ ಪುರಾತನ ನಂಬಿಕೆಯಾಗಲು ಸಾಧ್ಯ ಎಂದು ಪ್ರಶ್ನಿಸಿದೆ.