ಕಾಶ್ಮೀರದ ಯುವಕರು ಕಲ್ಲು ತೂರುವುದನ್ನು ತಡೆಯುವುದಕ್ಕಾಗಿ ಯುವಕನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿ ಆತನನ್ನು ಮಾನವ ಗುರಾಣಿಯಂತೆ ಬಳಸಿದ ಮೇಜರ್ ಗೊಗೊಯ್ ಅವರು ಘಟನೆ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಮಾತನಾಡಿದ್ದು, ನಾನು ಮತ್ತು ಇತರೆ ನಾಲ್ವರು ಸೇನಾ ಸಿಬ್ಬಂದಿ ಮತಗಟ್ಟೆಯ ಭದ್ರತೆ ಪರಿಶೀಲಿಸು ಹೋಗಿದ್ದೇವೆ. ಈ ವೇಳೆ ಕೆಲವು ಯುವಕರು ನಮ್ಮ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆಯಲು ಆರಂಭಿಸಿದರು. ಸ್ಥಳೀಯರ ಹಾಗೂ ನಮ್ಮ ಪ್ರಾಣ ರಕ್ಷಣೆಗಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ.