ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಭಯೋತ್ಪಾದಕರಿಂದ ಎದುರಾಗಲಿರವಷ್ಟೇ ಅಪಾಯ ಕಲ್ಲುತೂರಾಟಗಾರರಿಂದಲೂ ಎದುರಾಗುವ ಸಾಧ್ಯತೆ ಇದ್ದು, 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಬೇಕೆಂದು ಜಮ್ಮು-ಕಾಶ್ಮೀರ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಅಮರನಾಥ ಯಾತ್ರೆ ಶಾಂತಿಯಿಂದ ನಡೆಯಬೇಕಿದ್ದು, 27,000 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ ಎಂದಿದ್ದಾರೆ.