ಅತ್ಯಾಚಾರ ಪ್ರಕರಣ: ಗಾಯತ್ರಿ ಪ್ರಜಾಪತಿಗೆ ಮಂಜೂರಾಗಿದ್ದ ಜಾಮೀನು ವಜಾ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ...
ಮಾಜಿ ಸಚಿವ ಗಾಯತ್ರಿ ಪ್ರಜಾಪತಿ
ಮಾಜಿ ಸಚಿವ ಗಾಯತ್ರಿ ಪ್ರಜಾಪತಿ
Updated on
ಲಕ್ನೋ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮತ್ತು ಇತರರಿಗೆ ಲಕ್ನೋದ ಸೆಷನ್ಸ್ ಕೋರ್ಟ್ ನೀಡಿದ ಜಾಮೀನನ್ನು ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಶುಕ್ರವಾರ ರದ್ದುಪಡಿಸಿದೆ. 
ಹೈಕೋರ್ಟ್ ಪೀಠ ತನ್ನ ಆದೇಶದಲ್ಲಿ ಸೆಷನ್ಸ್ ಕೋರ್ಟ್ ಆತುರದಿಂದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ.ಇದಕ್ಕೂ ಮುನ್ನ ಮೇ 12ರಂದು ಲಕ್ನೋ ನ್ಯಾಯ ಪೀಠ, ಪ್ರಜಾಪತಿಗೆ ಜಾಮೀನು ನೀಡದಂತೆ ಈ ಹಿಂದೆ ನೀಡಿದ್ದ ನಿರ್ಧಾರವನ್ನು ಎತ್ತಿಹಿಡಿಯಿತು.
ತಲೆಮರೆಸಿಕೊಂಡಿರುವ ಪಿಂಟು ಸಿಂಗ್ ಮತ್ತು ವಿಕಾಸ್ ವರ್ಮ ಅವರ ಜಾಮೀನನ್ನು ಕೂಡ ರದ್ದುಪಡಿಸಲಾಗಿದ್ದು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. 
ಸಹ ಆರೋಪಿ ವಿಕಾಸ್ ವರ್ಮಾಗೆ 2 ದಿನಗಳೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಮೇ 4ರಂದು ವಿಕಾಸ್ ಸ್ವರೂಪ್ ಗೆ ಸೂಚಿಸಿತ್ತು.
ಗಾಯತ್ರಿ ಪ್ರಜಾಪತಿ ಮತ್ತು ಇಬ್ಬರು ಆರೋಪಿಗಳಿಗೆ ತ್ವರಿತ ನ್ಯಾಯಾಲಯ ಈ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಆದರೆ ಅಲಹಾಬಾದ್ ಹೈ ಕೋರ್ಟ್ ಜಾಮೀನು ಆದೇಶವನ್ನು ವಜಾಗೊಳಿಸಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com