ಕಣ್ಣೂರಿನಲ್ಲಿ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಂವಿಧಾನದ ಆರ್ಟಿಕಲ್ 247 ನ್ನು ಜಾರಿಗೊಳಿಸುವುದು ಉತ್ತಮ ಆಯ್ಕೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಆರ್ಟಿಕಲ್ 247 ನ್ನು ಜಾರಿಗೊಳಿಸುವುದರಿಂದ ಜಿಲ್ಲಾವಾರು ಮಟ್ಟದಲ್ಲಿ ಮ್ಯಾಜಿಸ್ಟ್ರೇಟ್ ನ್ನು ನೇಮಕ ಮಾಡಲು ಸಂಸತ್ ಗೆ ಅಧಿಕಾರವಿರುತ್ತದೆ. ಸಂಸತ್ ನಿಂದ ನಿಯೋಜನೆಗೊಂಡಿರುವ ಮ್ಯಾಜಿಸ್ಟ್ರೇಟ್ ಗೆ ಯಾವುದೇ ಆದೇಶ ಹಾಗೂ ವಾರೆಂಟ್ ಜಾರಿ ಮಾಡುವುದಕ್ಕೆ ಪರಮಾಧಿಕಾರ ಇರಲಿದ್ದು ಕಣ್ಣೂರಿನಲ್ಲಿ ಆರ್ ಎಸ್ಎಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಆರ್ಟಿಕಲ್ 247 ನ್ನು ಜಾರಿಗೊಳಿಸಿ ಕೇಂದ್ರ ಸರ್ಕಾರವೇ ಮ್ಯಾಜಿಸ್ಟ್ರೇಟ್ ನ್ನು ನೇಮಕ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.