ಕೇಂದ್ರ ಸರ್ಕಾರದ ನೂತನ ಜಾನುವಾರು ಹತ್ಯೆಯನ್ನು ವಿರೋಧಿಸಿ ಐಐಟಿ ಮದ್ರಾಸ್ ನಲ್ಲಿ ಬೀಫ್ ಔತಣಕೂಟ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಔತಣಕೂಟಕ್ಕೆ ಹೊರಟಿದ್ದ ಸೂರಜ್ ಅವರನ್ನು ಮತ್ತೊಂದು ವಿದ್ಯಾರ್ಥಿಗಳ ಗುಂಪು ಅಡ್ಡಗಟ್ಟಿ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿತ್ತು. ಬಲಗಣ್ಣಿನ ಮೇಲೆ ಬಲವಾದ ಪೆಟ್ಟಿಗೆ ಗುರಿಯಾದ ಸೂರಜ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.