ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಪ್ರಕರಣ: ದಿನಕರನ್, ಮಲ್ಲಿಕಾರ್ಜುನ್ ಗೆ ಜಾಮೀನು

ಪಕ್ಷದ ಎರಡು ಎಲೆ ಗುರುತಿಗಾಗಿ ಚುನಾವಣಾ ಆಯೋಗ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ...
ಟಿ.ಟಿ.ವಿ ದಿನಕರನ್
ಟಿ.ಟಿ.ವಿ ದಿನಕರನ್
ನವದೆಹಲಿ: ಪಕ್ಷದ ಎರಡು ಎಲೆ ಗುರುತಿಗಾಗಿ ಚುನಾವಣಾ ಆಯೋಗ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ದೆಹಲಿ ಕೋರ್ಟ್ ಇಂದು ಟಿ.ಟಿ.ವಿ. ದಿನಕರನ್ ಮತ್ತು ಆತನ ಸಹಚರ ಮಲ್ಲಿಕಾರ್ಜುನ್ ಅವರಿಗೆ ಜಾಮೀನು ಮಂಜೂರು ಮಾಡಿದೆ.
ದೆಹಲಿಯ ತಿಜ್ ಹಜಾರಿ ನ್ಯಾಯಾಲಯ ಇಬ್ಬರಿಗೂ ವೈಯಕ್ತಿಕ ಬಾಂಡ್ 5 ಲಕ್ಷ ರೂಪಾಯಿ ನೀಡುವಂತೆ ಆದೇಶ ನೀಡಿದೆ. ಇಬ್ಬರೂ ತಮ್ಮ ಪಾಸ್ ಪೋರ್ಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗಿದೆ.
ಈ ವಿಷಯದಲ್ಲಿ ದಿನಕರನ್ ಗೆ ಮಧ್ಯವರ್ತಿಯಾಗಿದ್ದ ಸುಕೇಶ್ ಚಂದ್ರಶೇಖರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ನಿರಾಕರಿಸಿದ್ದರು. ಆ ಬಳಿಕ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು.
ಸುಕೇಶ್ ವಿರುದ್ಧ ಅನೇಕ ಕೇಸುಗಳ ವಿಚಾರಣೆ ಬಾಕಿ ಉಳಿದಿದ್ದು, ಕೇಸಿಗೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳು ಆಗಲಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com