ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ: ಸೇನಾ ಮುಖ್ಯಸ್ಥ
ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಗುರಿಯನ್ನು ಭಾರತೀಯ ಸೇನೆ ಹೊಂದಿದ್ದು, ಉಗ್ರರ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ.
ಪುಲ್ವಾಮಾ ಎನ್ ಕೌಂಟರ್ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಉಗ್ರರ ವಿರುದ್ಧದ ಇಂತಹ ಕಾರ್ಯಾಚರಣೆಗಳು ಹೀಗೆಯೇ ಮುಂದುವರೆಯಲಿದೆ. ಭಯೋತ್ಪಾದನೆಯನ್ನು ಪಸರುವಂತೆ ಮಾಡುತ್ತಿರುವ ಜನರನ್ನು ನಾವು ಮಟ್ಟ ಹಾಕುತ್ತೇವೆ. ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಗುರಿಯನ್ನು ಸೇನೆ ಹೊಂದಿದ್ದು, ಉಗ್ರ ಮಸೂದ್ ಅಝರ್ ಅಳಿಯನೇ ಆಗಲೀ ಅಥವಾ ಬೇರಾರೇ ಆಗಲೀ ಅವರನ್ನು ಮಟ್ಟ ಹಾಕುದ್ದೇವೆಂದು ಹೇಳಿದ್ದಾರೆ.