ಪಾಕಿಸ್ತಾನದ ಮಸೀದಿಯೊಂದರಲ್ಲಿ ಮಾಡಿರುವ ಭಾಷಣದ ಪ್ರಕಾರ ಮಸೂದ್ ಬಿಎಸ್ಎಫ್ ಕ್ಯಾಂಪ್ ನಲ್ಲಿ ನಡೆದಿರುವ ದಾಳಿಯ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಇರುವುದನ್ನು ಒಪ್ಪಿಕೊಂಡಿದ್ದು, ಜಿಹಾದ್ ನ್ನು ತೀವ್ರಗೊಳಿಸುವಂತೆ ಕರೆ ನೀಡಿದ್ದಾನೆ. 2000 ದಿಂದ ಪ್ರಾರಂಭವಾಗಿರುವ ಆತ್ಮಹತ್ಯಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಭಯೋತ್ಪಾದಕ ಮಸೂದ್ ಅಜರ್ ಹೇಳಿದ್ದಾನೆ. ಇತ್ತೀಚೆಗಷ್ಟೇ ಆತನ ಸಂಬಂಧಿಯಾಗಿದ್ದ ತಲ್ಹಾ ರಶೀದ್ ತನ್ನ ಇಬ್ಬರು ಸಹಚರರೊಂದಿಗೆ ಗಡಿಯಿಂದ ಒಳನುಸುಳುತ್ತಿದ್ದ ವೇಳೆ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಬೆನ್ನಲ್ಲೇ ಮಸೂದ್ ಅಜರ್ ಈ ಹೇಳಿಕೆ ನೀಡಿದ್ದಾನೆ.