ರಾಮನಾಥ್ ಕೋವಿಂದ್
ರಾಮನಾಥ್ ಕೋವಿಂದ್

ಭೂಪಾಲ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗೆ ಗೌರವ ವಂದನೆ

ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ವಹಿಸಿಕೊಂಡ ನಂತರ ರಾಷ್ಟಪತಿ ರಾಮನಾಥ್ ಕೋವಿಂದ್ ಮೊದಲ ಬಾರಿಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಿದರು...
ಭೂಪಾಲ್: ದೇಶದ ಪ್ರಥಮ ಪ್ರಜೆಯಾಗಿ  ಅಧಿಕಾರ ವಹಿಸಿಕೊಂಡ ನಂತರ ರಾಷ್ಟಪತಿ ರಾಮನಾಥ್ ಕೋವಿಂದ್ ಮೊದಲ ಬಾರಿಗೆ ಮಧ್ಯಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ಭೂಪಾಲ್ ನ ರಾಜಾ ಬೋಜ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಮೊದಲ ದಿನದ ಭೇಟಿಯ ವೇಳೆ ಮೇಜರ್ ಜನರಲ್ ಎಎಚ್ ಚೌಹಾಣ್, ರಾಷ್ಟ್ರಪತಿಯವರಿಗೆ ಬೆಂಗಾವಲಾಗಿ ಕರೆದೊಯ್ದರು. ಸೇನಾ ಘಟಕ ರಾಷ್ಟ್ರಪತಿಗಳಿಗೆ ಗೌರವ ವಂದನೆ ಸಲ್ಲಿಸಿತು, ಇದೇ ವೇಳೆ ಮೇಜಯ್ ವಿನೀತ್ ನಾರಾಯಣ್ ತಂಡ ಪರೇಡ್ ನಡೆಸಿತು.
ಭೂಪಾಲ್ ನಲ್ಲಿ  ನಡೆದ  ಸದ್ಗುರು ಕಬಿಲ್ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಂತರ ರಾಣಿ ಜಲ್ಕರಿ ಬಾಯಿ ಅವರಿದೆ ಶ್ರದ್ದಾಂಜಲಿ ಸಲ್ಲಿಸಿದರು. ನಾಳೆ ಅಮರ್ ಕಂಟಕ್ ನಲ್ಲಿ ನಡೆಯುವ ಇಂದಿರಾ ಗಾಂಧಿ ಟ್ರೈಬಲ್ ವಿವಿಯ 2ನೇ ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com