ವಿಪಕ್ಷ ನಾಯಕರ ಕಾಲು ಮುರಿಯುತ್ತೇನೆ: ಟಿಎಂಸಿ ಮುಖಂಡನ ಬೆದರಿಕೆ

ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡ ಅನುಬ್ರಾಟ್ ಮನ್ಡೊಲ್ ವಿಪಕ್ಷ ನಾಯಕರಾದ ಅಬ್ದುಲ್ ಮನಾನ್ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿಕಾಸ್...
ಅನುಬ್ರಾತ್ ಮಂಡಲ್
ಅನುಬ್ರಾತ್ ಮಂಡಲ್
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡ ಅನುಬ್ರಾತ್ ಮಂಡಲ್ ವಿಪಕ್ಷ ನಾಯಕರಾದ ಅಬ್ದುಲ್ ಮನಾನ್ ಮತ್ತು ಕಮ್ಯುನಿಸ್ಟ್ ಪಕ್ಷದ ಮುಖಂಡ ಬಿಕಾಸ್ ಭಟ್ಟಾಚಾರ್ಯ ಅವರ ಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾರೆ. 
ಮಂಡಲ್ ಅಲಿಯಾರ್ ಕೆಸ್ಟೋ ಸದ್ಯ ಬಿರ್ಬಮ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಪೊಲೀಸರ ಮುಂದೆ ಅನುಬ್ರಾಟ್ ಆವಾಜ್ ಹಾಕಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ಅತಿರೇಕದ ವರ್ತನೆಯಿಂದಾಗಿ ಅನುಬ್ರಾಟ್ ಮಂಡಲ್ ಈ ಹಿಂದೆಯೂ ವಿವಾದಕ್ಕೆ ಕಾರಣವಾಗಿದ್ದರು. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೇ ಅಂತವರ ಮನೆಗೆ ರಾತ್ರಿ ವೇಳೆ ನಮ್ಮ ಕಾರ್ಯಕರ್ತರು ನುಗ್ಗುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com