ಮಾಧ್ಯಮ ಛಾಯಾಗ್ರಾಹಕರ ವರ್ತನೆಗೆ ಐಶ್ವರ್ಯ ರೈ ಕಿಡಿ, ಕಣ್ಣೀರಿಟ್ಟ ನಟಿ

Aishwarya Rai Bachchan visited Shushrusha Hospital, in Mumbai on Nov 20, along with her mother Brinda and daughter Aaradhya to celebrate her late father’s birth...
ಐಶ್ವರ್ಯ ರೈ
ಐಶ್ವರ್ಯ ರೈ
Updated on
ಮುಂಬೈ: ತಮ್ಮ ತಂದೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಚಿತ್ರ ತೆಗೆಯಲು ಮುಗಿಬಿದ್ದ ಛಾಯಾಗ್ರಾಹಕರ ಬಗ್ಗೆ ಐಶ್ವರ್ಯ ರೈ ಅಸಮಾಧಾನಗೊಂಡಿದ್ದಾರೆ. 
ಮುಂಬೈ ನಲ್ಲಿ ಸೀಳು ತುಟಿ ಚಿಕಿತ್ಸೆ ಹಾಗೂ ಪ್ಯಾಲಟೆಸ್ ಚಿಕಿತ್ಸೆಗಾಗಿ ತಾವು ನೆರವು ನೀಡಿದ್ದ ಮಕ್ಕಳೊಂದಿಗೆ ಐಶ್ವರ್ಯ ರೈ ತಮ್ಮ ತಂದೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ.20 ರಂದು ಸ್ಮೈಲ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರು ಫೋಟೊ ಕ್ಲಿಕ್ಕಿಸಲು ಮುಗಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಐಶ್ವರ್ಯ ರೈ, ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮ ದಯವಿಟ್ಟು ನಿಲ್ಲಿಸಿ, ನಿಮಗೆ ಕೆಲಸ ಗೊತ್ತಿಲ್ಲ ಎಂದು ಹೇಳಿದ್ದಾರೆ. 
ತಮ್ಮ ಖಾಸಗಿತನವನ್ನು ಗೌರವಿಸುವಂತೆ ಛಾಯಾಗ್ರಾಹಕರಲ್ಲಿ ಮನವಿ ಮಾಡಿ ಐಶ್ವರ್ಯ ರೈ ಕಣ್ಣೀರಾದರು ಎಂದು ಇಂಡಿಯಾ.ಕಾಮ್ ವರದಿ ಪ್ರಕಟಿಸಿದೆ. ಐಶ್ವರ್ಯ ರೈ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಜೆಯ ನಂತರ ಔತಣ ಕೂಟ ಏರ್ಪಡಿಸಿದ್ದ ಬಚ್ಚನ್ ಜೋಡಿ ಆರಾಧ್ಯ ಜನ್ಮದಿನವನ್ನೂ ಆಚರಿಸಿದ್ದು, ಕಾರ್ಯಕ್ರಮಕ್ಕೆ ಶಾರೂಖ್ ಖಾನ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com