ದೇಶದಾದ್ಯಂತ ಸಂಭವಿಸಿದ ರೈಲು ದುರಂತಗಳ ಬಗೆಗೆ ಹೇಳುತ್ತಾ, "ಬುಉಲೆಟ್ ರೈಲು ಮೋದಿ ಸರ್ಕಾರದ ಕನಸು, ಆದರೆ ರೈಲು ದುರಂತಗಳಲ್ಲ! ಇದರ ಬಗೆಗೆ ಮೋದಿ, ಅವರ ಹಿಂಬಾಲಕರಾರೂ ಒಂದು ಮಾತನ್ನೂ ಆಡುವುದಿಲ್ಲ. ವ್ಯವಹಾರಸ್ಥ ಅಥವಾ ಉದ್ಯಮಿಯೊಬ್ಬ ದೇಶವನ್ನಾಳುವುದು ಸರಿಯಾದ ಕ್ರಮವಲ್ಲ. "ಮೋದಿ ಅವರ ಆಳ್ವಿಕೆಯು ದೇವರ ಆಶೀರ್ವಾದ ಎಂದು ಭಾವಿಸುವ ಜನರು ಸರ್ವಶಕ್ತನಿಗೆ ಅಗೌರವ ತೋರುತ್ತಿದ್ದಾರೆ, ಆದರೆ ಆತನೇ ಸಾಮಾನ್ಯ ಪ್ರಜಾಪ್ರಭುತ್ವದ ದೇವರು" ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ತಿಳಿಸಿದೆ.