ಆರೋಪಿ ಬಾಲಕನ ತಂದೆಯೊಂದಿಗೆ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ಷರತ್ತು ಮತ್ತು ನಿಯಮಗಳು ಅಂತಿಮವಾಗುತ್ತಿದ್ದಂತೆಯೇ ತಾವು ಆರೋಪಿ ಪರ ವಕಾಲತ್ತು ವಹಿಸುವುದಾಗಿ ತನ್ವೀರ್ ಅಹ್ಮದ್ ತಿಳಿಸಿದ್ದಾರೆ. ಮಗನ ಪರ ವಕಾಲತ್ತು ವಹಿಸುವುದಕ್ಕಾಗಿ ಅತ್ಯುತ್ತಮ ವಕೀಲರನ್ನು ನೇಮಕ ಮಾಡುವುದಾಗಿ ಆರೋಪಿ ತಂದೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಗುರುಗಾಂವ್ ಪೊಲೀಸರು ತಮ್ಮ ಮಗನನ್ನು ಸಾಕ್ಷ್ಯ ಎಂದು ಪರಿಗಣಿಸಿದ್ದರು. ಆದರೆ ಸಿಬಿಐ ಆತನನ್ನು ಆರೋಪಿಯನ್ನಾಗಿಸಿ, ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.