ಸಿಪಿಆರ್ ಎಫ್ ನಲ್ಲಿ ನ.25 ರಂದು ಆಯೋಜಿಸಲಾಗಿದ್ದ ಎರಡನೇ ವಿಶ್ವಯುದ್ಧ ಹಾಗೂ ಮದ್ರಾಸ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ರಾಮಕೃಷ್ಣನ್, ಬಾಂಬಿಂಗ್ ನ್ನು ಎದುರಿಸಲು ಮದ್ರಾಸ್ 5 ವರ್ಷಗಳಿಂದಲೂ ಎಚ್ಚರವಾಗಿತ್ತು. ಅಂತಿಮವಾಗಿ ಘಟನೆ ನಡೆದಾಗ ವಾಯುದಾಳಿ ಸೈರನ್ ಮೌನವಾಗಿತ್ತು. ಜಪಾನ್ ಹಾಕಿದ ಬಾಂಬ್ ಗಳು ಸೇಂಟ್ ಜಾರ್ಜ್ ಪ್ರದೇಶದ ಉತ್ತರ ಭಾಗದಲ್ಲಿ ಬಿದ್ದವು, ಇಷ್ಟೆಲ್ಲಾ ಆದರೂ ರೆಡಿಯೋಗಳು ಮೌನವಾಗಿರುವುದನ್ನು, ನಗರದಲ್ಲಿ ಬೆಳಕೇ ಇಲ್ಲದಿರುವುದನ್ನು ಗಮನಿಸಿ ಜಪಾನ್ ಅಚ್ಚರಿಗೊಂಡಿತ್ತು. ಬಾಂಬಿಂಗ್ ನಲ್ಲಿ ಹಲವಾರು ಜನರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹಬ್ಬಿದವು. ಆದರೆ ಘಟನೆಯಲ್ಲಿ ಇಬ್ಬರು ಮಾತ್ರ ಮೃತಪಟ್ಟಿದ್ದರು ಎಂದು ಸರ್ಕಾರವೇ ಸ್ಪಷ್ಟಪಡಿಸಿತು. ಇದಕ್ಕೂ ಮುನ್ನ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಗಾಬರಿಯಾಗಿದ್ದ ಜನರು ಸಾಮೂಹಿಕ ವಲಸೆ ಹೋಗಲು ಪ್ರಾರಂಭಿಸಿದರು. ಸರ್ಕಾರ ಬ್ಯಾಂಕ್ ಹಾಗೂ ಸಂಸ್ಥೆಗಳಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಹೇಳಿದಾಗ ಜನರೂ ವಲಸೆ ಹೋದರು, ಕೇವಲ ಒಂದು ವಾರದಲ್ಲಿ ಲಕ್ಷಾಂತರ ಜನರು ಮದ್ರಾಸ್ ತೊರೆದು ಕುಂಭಕೋಣಂ ನಂತಹ ಸಣ್ಣ ಪಟ್ಟಣಗಳಿಗೆ ತೆರಳಿದರು ಎಂದು ರಾಮಕೃಷ್ಣನ್ ಇತಿಹಾಸದ ಘಟನೆಗಳನ್ನು ಸ್ಮರಿಸಿದ್ದಾರೆ.