ಹಿಂಸಾಚಾರ ವಿರೋಧಿ ಕಾನೂನು, ಮಾಜಿ ಕಾನೂನು ಸಚಿವ ಅಶ್ವಿನಿ ಕುಮಾರ್ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹಿಂಸೆಯ ವ್ಯಾಖ್ಯಾನ ಹಾಗೂ ತಡೆ ಕಾನೂನನ್ನು ಜಾರಿಗೆ ತರಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಸಲ್ಲಿಸಿದ್ದ ಮನವಿಯನ್ನು ........
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on
ನವದೆಹಲಿ: ಹಿಂಸೆಯ ವ್ಯಾಖ್ಯಾನ ಹಾಗೂ ತಡೆ ಕಾನೂನನ್ನು ಜಾರಿಗೆ ತರಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಮಾಜಿ ಕೇಂದ್ರ ಕಾನೂನು ಸಚಿವ ಅಶ್ವನಿ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.  2016 ರಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ, ಕುಮಾರ್ ಅವರು ಹಿಂಸೆಯನ್ನು ತಡೆಗಟ್ಟಲು ಶಾಸಕಾಂಗ ಕಾನೂನನ್ನು ಜಾರಿಗೆ ತರಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ಗೆ ನಿರ್ದೇಶಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ ಒತ್ತಾಯಿಸಿದ್ದರು.
ಆದರೆ ಇದೀಗ ಸುಪ್ರೀಂ ಕೋರ್ಟ್ ಈ ಮನವಿ ವಜಾಗೊಳಿಸಿರುವದರೊಡನೆ ಕೇಂದ್ರಕ್ಕೆ ಈ ಸಂಬಂಧ ಯಾವ ಸೂಚನೆಯನ್ನು ನೀಡಲು ನಿರಾಕರಿಸಿದೆ. 
ನೂನು ಆಯೋಗದ ಶಿಫಾರಸಿನ ನಂತರ ಸರ್ಕಾರವು ಹಿಂಸೆ ವಿರೋಧಿ ಕಾನೂನನ್ನು ತರಲು ಗಂಭೀರವಾಗಿ ಚಿಂತನೆ ನಡೆಸಿತ್ತು ಎಂದು ಕೇಂದ್ರವು ಕೋರ್ಟ್ ಗೆ ಮನವರಿಕೆ ಮಾಡಿತ್ತು. ಅಕ್ಟೋಬರ್ ನಲ್ಲಿ ಕಾನೂನು ಆಯೋಗವು  ತನ್ನ 273 ನೇ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಅದರಂತೆ ಹಿಂಸಾಚಾರ ವಿರುದ್ಧ, ಏಕೈಕ ಶಾಸನ ರಚನೆಗೆ ಶಿಫಾರಸ್ ಮಾಡಲಾಗ ಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com