ಹಿರಿಯ ವಕೀಲ ವಿ.ಶೇಖರ್ ಮತ್ತು ಇಂಡು ಮಲ್ಹೋತ್ರಾ- ಇಬ್ಬರು ಅಮಿಕಸ್ ಕ್ಯೂರಿ ಅವರ ಸಲಹೆಯಂತೆ, ನ್ಯಾಯಾಲಯದ ಮಾರ್ಗದರ್ಶನವನ್ನು ಪ್ರಕರಣದ ಸಂಬಂಧ ಪಟ್ಟವರು "ಒಪ್ಪಿಕೊಳ್ಳಬಹುದು ಅಥವಾ ತಳ್ಳಿಹಾಕಬಹುದು" ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣಗಳಲ್ಲಿ ಪೊಲೀಸರು ಹೇಗೆ ಮುಂದುವರಿಯಬೇಕು ಎಂಬುದರ ಬಗ್ಗೆ ಮಾರ್ಗದರ್ಶನಗಳನ್ನು ರೂಪಿಸಬೇಕೆಂದು ಅವರು ಅಭಿಪ್ರಾಯಪಟ್ಟಿದ್ದರು.. ಇದೀಗ ಸುಪ್ರೀಂ ಕೋರ್ಟ್, ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಶಾಸನ ಬದ್ದವಾದ ಕ್ರಮಗಳನ್ನು ಕೈಗೊಳ್ಳಉ (ಐಪಿಸಿ ಸೆಕ್ಷನ್ 498 ಎ ಜಾರಿಗೆ ತರಲು) ಮಾರ್ಗದರ್ಶಿ ಸೂತ್ರಗಳ ಅಗತ್ಯವಿಲ್ಲ ಎಂದು ಹೇಳಿದೆ.