ದೆಹಲಿ ಸರ್ಕಾರದ ಸಾರಿಗೆ ಸಚಿವ ಕೈಲಾಶ್ ಗೆಹ್ಲೊಟ್ ಮಂಡಿಸಿದ ಉದ್ದೇಶಿತ ಮೆಟ್ರೊ ದರ ಏರಿಕೆಯ ನಿರ್ಣಯವನ್ನು ಸದನ ಸದಸ್ಯರು ಧ್ವನಿ ಮತದ ಮೂಲಕ ಅನುಮೋದಿಸಿದರು. ಮೆಟ್ರೊ ರೈಲಿನ ಸಂಪೂರ್ಣ ನಿರ್ವಹಣೆ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ನಿಯಮ ನಿಬಂಧಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ತಿಳಿಸಿದ್ದಾರೆ. ಮೆಟ್ರೊ ರೈಲಿನ ದರ ಏರಿಕೆಯನ್ನು ನಿಲ್ಲಿಸಬೇಕೆಂದರೆ ದೆಹಲಿ ಸರ್ಕಾರ 3,000 ಕೋಟಿ ರೂಪಾಯಿ ವಾರ್ಷಿಕ ಅನುದಾನ ನೀಡಬೇಕೆಂದು ಹೇಳಿದ್ದಾರೆ.