ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅವರು ''ವಿಶ್ವ ಪರಿತ್ಯಾಗಿ''ಯಾಗಿರುವುದರಿಂದ, ಆತನ ಬಳಿ ಹಣ ಇಲ್ಲ, ಹೀಗಾಗಿ ಅವರಿಗೆ ವಿಧಿಸಿರುವ 30 ಲಕ್ಷ ರುಪಾಯಿ ದಂಡ ಪಾವತಿಸಲು ಸಾಧ್ಯವಿಲ್ಲ ಎಂದು ಅತ್ಯಾಚಾರ ಬಾಬ ಪರ ವಕೀಲರು ಸೋಮವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ತಿಳಿಸಿದ್ದಾರೆ.