ಜಾತಿ, ಓಲೈಕೆ ರಾಜಕಾರಣ ಅಂತ್ಯಗೊಳಿಸಿ: ಯೋಗಿ ಆದಿತ್ಯನಾಥ್

ರಾಜ್ಯವನ್ನು ಜಾತಿ ಮತ್ತು ಓಲೈಕೆ ರಾಜಕಾರಣದಿಂದ ಮುಕ್ತಗೊಳಿಸಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್....
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್
ಗೋರ್ಖಪುರ್: ರಾಜ್ಯವನ್ನು ಜಾತಿ ಮತ್ತು ಒಲೈಕೆ ರಾಜಕಾರಣದಿಂದ ಮುಕ್ತಗೊಳಿಸಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಗೋರ್ಖಪುರ್ ಗೇಲ್ ಗ್ಯಾಸ್ ಟರ್ಮಿನಲ್ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವನ್ನು ಒಂದು ಬಲಿಷ್ಠ ರಾಜ್ಯವನ್ನಾಗಿ ಮಾಡಬೇಕು. ಹೀಗಾಗಿ ರಾಜ್ಯದಲ್ಲಿ ಕಳೆದ 15ರಿಂದ 20 ವರ್ಷಗಳಿಂದ ನಡೆಯುತ್ತಿರುವ ಜಾತಿ ಮತ್ತು ಓಲೈಕೆ ರಾಜಕಾರಣ ಅಂತ್ಯಗೊಳಿಸಬೇಕಾಗಿದೆ ಎಂದಿದ್ದಾರೆ.
ನಮ್ಮ ಸರ್ಕಾರ ಪ್ರಮುಖವಾಗಿ ರೈತರ, ಮಹಿಳೆಯರ ಹಾಗೂ ಪ್ರಮುಖ ವಾಹಿನಿಗೆ ಬರದ ಜನರಿಗೆ ಹೆಚ್ಚು ಆದ್ಯತೆ ನೀಡಲಿದೆ ಎಂದು ಉತ್ತರ ಪ್ರದೇಶ ಸಿಎಂ ತಿಳಿಸಿದ್ದಾರೆ.
ಉತ್ತರ ಪ್ರದೇಶ ಬಲಿಷ್ಠವಾದಾಗಲೇ ಭಾರತ ಸಹ ಬಲಿಷ್ಠವಾಗಲು ಸಾಧ್ಯ. ದೇಶಕ್ಕಾಗಿಯಾದರೂ ನಾವು ಜಾತಿ ಮತ್ತು ಓಲೈಕೆ ರಾಜಕಾರಣಕ್ಕೆ ಕಡಿವಾಣ ಹಾಕಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com