ತಿರುಪುರ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ, ನೊಂದ ಪೋಷಕರು ಆತ್ಮಹತ್ಯೆಗೆ ಶರಣು

16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅಕೆಯ ಸ್ನೇಹಿತನೇ ಆತ್ಯಾಚಾರ ಎಸಗಿದ್ದು, ಘಟನೆಯಿಂದ ತೀವ್ರವಾಗಿ ನೊಂದಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುಪುರ: 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅಕೆಯ ಸ್ನೇಹಿತನೇ ಆತ್ಯಾಚಾರ ಎಸಗಿದ್ದು, ಘಟನೆಯಿಂದ ತೀವ್ರವಾಗಿ ನೊಂದಿದ್ದ ಬಾಲಕಿ ತಂದೆ ರಾಜಗೋಪಾಲ್(37) ಹಾಗೂ ತಾಯಿ ಅನಿತಾ(32)(ಹೆಸರು ಬದಲಿಸಲಾಗಿದೆ) ಅವರು ಆತ್ಮಹತ್ಯೆ ಮಾಡಿರೊಂಡಿರುವ ದಾರುಣ ಘಟನೆ ತಿರುಪುರದಲ್ಲಿ ಭಾನುವಾರ ನಡೆದಿದೆ.
ಪುದುಚೇರಿಯ ಕತಿರ್ ಕಂಬಮ್ ನ ರಾಜಗೋಪಾಲ್ ಮತ್ತು ಅನಿತಾ ದಿನಗೂಲಿ ಕಾರ್ಮಿಕರಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಈ ಪೈಕಿ ಹಿರಿಯ ಮಗಳು 12ನೇ ತರಗತಿ ವಿದ್ಯಾರ್ಥಿನಿ ಮೇಲೆ ಇತ್ತೀಚಿಗ ಆಕೆಯ ಸ್ನೇಹಿತನೇ ಅತ್ಯಾಚಾರ ಎಸಗಿದ್ದ. ಈ ಸಂಬಂಧ ಕುಟುಂಬ ಪುದುಚೇರಿಯ ಕೋರಿಮೆಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಕ್ಸೊ ಕಾಯ್ದೆಯಡಿ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಮಧ್ಯೆ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ದಂಪತಿ, ಪುದುಚೇರಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಿದ ನಂತರ ಒತ್ತಡ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ದಿಂಡುಗುಲ್, ತಿರುಪುರ ಮತ್ತು ಪಳನಿಗೆ ಪ್ರವಾಸ ಹೋಗಿದ್ದರು. 
ಶುಕ್ರವಾರ ಸಂಜೆ ತಿರುಪುರದಿಂದ ವಾಪಸ್ ಬರುವಾಗ ಧರಮಪುರಂ ರಸ್ತೆಯಲ್ಲಿ ಸಾಫ್ಟ್ ಡ್ರಿಂಕ್ ನೊಂದಿಗೆ ಕೀಟ ನಾಶಕ ಮಿಕ್ಸ್ ಮಾಡಿಕೊಂಡು ಕುಡಿದಿದ್ದಾರೆ. ಸಾಫ್ಟ್ ಡ್ರಿಂಕ್ಸ್ ಕುಡಿತ ಸ್ವಲ್ಪ ಹೊತ್ತಿನಲ್ಲೇ ದಂಪತಿ ಅಸ್ವಸ್ಥಗೊಂಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಬಾಲಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಕೂಡಲೇ ಅವರನ್ನು 108 ಆಂಬುಲೆನ್ಸ್ ಮೂಲಕ ತಿರುಪುರ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾಜಗೋಪಾಲ್ ಮತ್ತು ಅನಿತಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com