ಆರು ತಿಂಗಳ ಬಳಿಕ ಕೇದಾರನಾಥ ದೇವಸ್ಥಾನ ಬಾಗಿಲು ಇಂದು ತೆರೆದಿದ್ದು, ದೇವಸ್ಥಾನಕ್ಕೆ ಇಂದು ಬೆಳಗ್ಗೆ ಪ್ರಧಾನಿ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಪ್ರಧಾನ ಮಂತ್ರಿ, ಕೇದಾರನಾಥ ಕೇವಲ ತೀರ್ಥಯಾತ್ರೆಯ ಸ್ಥಳ ಮಾತ್ರವಲ್ಲ, ಇದು ಸಾಹಸ ಕ್ರೀಡೆಗಳಿಗೆ, ಪ್ರಾಕೃತಿಕ ಸೌಂದರ್ಯವನ್ನು ತೋರಿಸುವ ಮತ್ತು ಮಾದರಿ ಪರಿಸರ ಸ್ಥಳವಾಗಿದೆ. ಹೀಗಾಗಿ ಇದನ್ನು ಪ್ರಮುಖ ತೀರ್ಥ ಯಾತ್ರೆ ಸ್ಥಳ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ ಎಂದರು.