ಮೆರ್ಸಲ್ ವಿವಾದ: ಸರ್ಕಾರದ ನೀತಿಗಳನ್ನು ಪ್ರಶಂಸಿಸುವ ಸಾಕ್ಷ್ಯಚಿತ್ರಗಳನ್ನೇ ತಯಾರಿಸಬೇಕು, ಚಿದಂಬರಂ ಟೀಕೆ

ದೀಪಾವಳಿ ದಿನ ಬಿಡುಗಡೆಯಾದ ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ "ಮೆರ್ಸಲ್ " ನಲ್ಲಿ ಕೆಲವು ಸಂಭಾಷಣೆಗಳನ್ನು ತೆಗೆದುಹಾಕುವ ಕುರಿತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ.........
ಪಿ. ಚಿದಂಬರಂ
ಪಿ. ಚಿದಂಬರಂ
Updated on
ನವದೆಹಲಿ: ದೀಪಾವಳಿ ದಿನ ಬಿಡುಗಡೆಯಾದ ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ "ಮೆರ್ಸಲ್ " ನಲ್ಲಿ ಕೆಲವು ಸಂಭಾಷಣೆಗಳನ್ನು ತೆಗೆದುಹಾಕುವ  ಕುರಿತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿದಂಬರಂ ಬಿಜೆಪಿಯ ಮೇಲೆ ಹರಿಹಾಯ್ದಿದ್ದು "ಸರ್ಕಾರದ ನೀತಿಗಳನ್ನು ಪ್ರಶಂಸಿಸುವ ಸಾಕ್ಷ್ಯಚಿತ್ರಗಳನ್ನು ಮಾತ್ರ ತಯಾರಿಸಬೇಕು ಎನ್ನುವ ಕಾನೂನು ಜಾರಿಯಲ್ಲಿದೆ" ಎಂದು ಟೀಕಿಸಿದರು.
"ಮೆರ್ಸಲ್ " ನಲ್ಲಿ ನ ಸಂಭಾಷಣೆಗಳನ್ನು ತೆಗೆದುಹಾಕಲು ಬಿಜೆಪಿ ಹೇಳುತ್ತದೆ, ಇಂದೇನಾದರೂ 'ಪರಾಶಕ್ತಿ' ಬಿಡುಗಡೆಯಾದರೆ ಅದರ ಪರಿಣಾಮಗಳನ್ನು ಊಹಿಸಿಕೊಳ್ಳಿ." ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
"ಚಲನಚಿತ್ರ ತಯಾರಕರಿಗೆ ಸೂಚನೆ: ಕಾನೂನು ಬರುತ್ತಿದೆ, ನೀವು ಸರ್ಕಾರದ ನೀತಿಗಳನ್ನು ಪ್ರಶಂಸಿಸುವ ಸಾಕ್ಷ್ಯಚಿತ್ರಗಳನ್ನು ಮಾತ್ರ ತಯಾರಿಸಬೇಕು" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
1950 ರ ದಶಕದಲ್ಲಿ ಡಿಎಂಕೆ ನಾಯಕ ಎಂ. ಕರುಣಾನಿಧಿಯವರು ಬರೆದು ಶಿವಾಜಿ ಗಣೇಶನ್ ನಟಿಸಿದ್ದ "ಪರಾಶಕ್ತಿ" 50 ರ ದಶಕದಲ್ಲಿ ಜಾರಿಯಲ್ಲಿದ್ದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಪ್ರಬಲ ವಿಮರ್ಶೆಯಾಗಿತ್ತು, ಶಿವಾಜಿ ಗಣೇಶನ್ ಅವರ ಅದ್ಭುತ ಸಂಭಾಷಣೆಯಿಂದ ಚಿತ್ರ ಸಾಕಷ್ಟು ಜನಪ್ರಿಯವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com