ಮೋದಿ ನಮ್ಮೊಂದಿಗೆ ಇದ್ದಾರೆ, ಎಐಎಡಿಎಂಕೆಯನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ: ತಮಿಳುನಾಡು ಸಚಿವ

ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ಇರುವವರೆಗೆ ಯಾರೂ ಎಐಎಡಿಎಂಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ....
ಕೆ ಟಿ ರಾಜೇಂದ್ರ ಬಾಲಾಜಿ
ಕೆ ಟಿ ರಾಜೇಂದ್ರ ಬಾಲಾಜಿ
ಚೆನ್ನೈ: ನಮ್ಮ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ಇರುವವರೆಗೆ ಯಾರೂ ಎಐಎಡಿಎಂಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಮಿಳುನಾಡು ಡೈರಿ ಸಚಿವ ಕೆ ಟಿ ರಾಜೇಂದ್ರ ಬಾಲಾಜಿ ಅವರು ಹೇಳಿದ್ದಾರೆ.
 ಕಳೆದ ರಾತ್ರಿ ತಮಿಳುನಾಡಿನ ಅಂಡಿಪಟ್ಟಿಯಲ್ಲಿ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಾಲಾಜಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮೊಂದಿಗೆ ಇದ್ದಾರೆ. ಹೀಗಾಗಿ ಯಾರೂ ನಮ್ಮ ಪಕ್ಷವನ್ನು ಅಲುಗಾಡಿಸಲು ಮತ್ತು ನಾಶಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರ ಮೇಲೆ ನಮಗೆ ವಿಶ್ವಾಸವಿದೆ. ಪಳನಿಸ್ವಾಮಿ ಕ್ಯಾಂಪ್ ಗೆ ಪಕ್ಷದ ಎರಡೆಲೆ ಚಿಹ್ನೆ ಸಿಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿದ್ದಾರೆ.
ಆಡಳಿತರೂಢ ಎಐಎಡಿಎಂಕೆಯನ್ನು ಪ್ರತಿಪಕ್ಷ ಡಿಎಂಕೆ ಸೇರಿದಂತೆ ಯಾರೂ ವಿರೋಧಿಸುತ್ತಿಲ್ಲ. ಎಐಎಡಿಎಂಕೆಯ ಸಾಮಾನ್ಯ ಸಭೆಯ ಶೇ.92ರಷ್ಟು ಸದಸ್ಯರು ಪಳನಿಸ್ವಾಮಿಗೆ ಬೆಂಬಲ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com