ಇದೇ ವೇಳೆ ಯಮುನಾ ನದಿಯಿಂದ ತಾಜ್ ಮಹಲ್ ವಾರೆಗೂ ನಿರ್ಮಿಸಲು ಉದ್ದೇಶಿಸಲಾಗಿರುವ ಕಾರಿಡಾರ್ ಗಾಗಿ ಗುರುತಿಸಲಾಗಿರುವ ಪ್ರದೇಶವನ್ನೂ ಸಹ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸಲಿದ್ದಾರೆ. ತಾಜ್ ಮಹಲ್ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳು ಬಂದಿದ್ದು, ಈ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ತಾಜ್ ಗೆ ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.