ಮಲೇಷಿಯಾದಲ್ಲಿದ್ದ ಭಾರತಿಯ ಕುಟುಂಬಕ್ಕೆ ಸುಷ್ಮಾ ಸ್ವರಾಜ್ ನೆರವು

ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ವಾರಾಂತ್ಯದಲ್ಲಿ ಕಛೇರಿ ಮುಚ್ಚಿದ್ದರೂ ಸಹ  ಮಲೇಶಿಯಾದಲ್ಲಿನ ಭಾರತೀಯ ಕುಟುಂಬ ತಮ್ಮ ಪ್ರಯಾಣ ದಾಖಲೆಗಳನ್ನು ಪಡೆಯಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಕೌಲಾಲಾಂಪುರದ ಭಾರತೀಯ ದೂತಾವಾಸವನ್ನು ಕೇಳಿದ್ದಾರೆ.
ಮೀರಾ ರಮೇಶ್ ಪಟೇಲ್, ಅವರ ಕುಟುಂಬ ಮಲೇಷಿಯಾ ವಿಮಾನ ನಿಲ್ದಾಣದಲ್ಲಿದ್ದು ತನ್ನ ಪಾಸ್ ಪೋರ್ಟ್ ಕಳೆದುಕೊಂಡಿರುವುದಗಿ ಸುಷ್ಮಾ ಸ್ವರಾಜ್ ಗೆ ನೆರವು ನೀಡುವಂತೆ ಕೋರಿದ್ದರು. ಆಗ ಸುಷ್ಮಾ ಅವರ ಪ್ರತಿಕ್ರಿಯೆ ಬಂದಿತ್ತು. ಸುಷ್ಮಾ ಅವರ ಮನವಿಯಂತೆ ಮಲೇಶಿಯಾದ ಭಾರತೀಯ ರಾಯಬಾರ ಕಛೇರಿಯು ಪಟೇಲ್ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲಾಗುತ್ತಫೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com