ಮೋದಿ ಸಂಪುಟದಿಂದ 7 ಸಚಿವರಿಗೆ ಕೊಕ್ ಸಾಧ್ಯತೆ
ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಬಂಡಾರು ದತ್ತಾತ್ರೇಯ, ಉಮಾ ಭಾರತಿ, ರಾಜೀವ್ ಪ್ರತಾಪ್ ರೂಡಿ, ಫಗ್ಗನ್ ಸಿಂಗ್ ಕುಲಸ್ತೆ ಹಾಗೂ ಸಂಜೀವ್ ಬಲ್ಯಾನ್ ಅವರಿಗೆ ಕೊಕ್ ನೀಡಿದರೆ, ಪಕ್ಷದ ಕಾರ್ಯಕ್ಕಾಗಿ ಮಹೇಂದ್ರ ನಾಥ್ ಪಾಂಡೆ ಮತ್ತು ವಯಸ್ಸಿನ ಕಾರಣದಿಂದ ಕಲರಾಜ್ ಮಿಶ್ರಾ ಅವರಿಗೆ ಕೊಕ್ ನೀಡಲಾಗುತ್ತಿದೆ ಎನ್ನಲಾಗಿದೆ.
ಮೋದಿ ಸಂಪುಟಕ್ಕೆ ಹೊಸದಾಗಿ 6 ಮಂದಿ ಸೇರ್ಪಡೆ ಸಾಧ್ಯತೆ
ಕರ್ನಾಟಕದ ಪ್ರಹ್ಲಾದ್ ಜೋಶಿ, ಪ್ರಹ್ಲಾದ್ ಪಟೇಲ್, ಆನಂದ್ ರಾವ್(ಶಿವಸೇನೆ), ಸತ್ಯಪಾಲ್ ಸಿಂಗ್, ವಶಿಷ್ಠ ನಾರಾಯಣ ಸಿಂಗ್(ಜೆಡಿಯು) ಹಾಗೂ ಹಿಮಂತ್ ಬಿಸ್ವಾ ಶರ್ಮಾ ಅವರು ಹೊಸದಾಗಿ ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಬಡ್ತಿ ಪಡೆಯುವ ಸಚಿವರು?
ಕೇಂದ್ರ ಸಚಿವರಾದ ಆನಂತ್ ಕುಮಾರ್, ಜನರಲ್ ವಿಕೆ ಸಿಂಗ್, ಧರ್ಮೇಂದ್ರ ಪ್ರಧಾನ್ ಅವರಿಗೆ ಬಡ್ತಿ ನೀಡುವ ಸಾಧ್ಯತೆ ಇದೆ.
ಹಿಂಬಡ್ತಿ ಪಡೆಯುವ ಸಚಿವರು?
ರಾಧಾ ಮೋಹನ್ ಸಿಂಗ್, ಹರ್ಷವರ್ಧನ್ ಹಾಗೂ ಸುರೇಶ್ ಪ್ರಭು ಅವರಿಗೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.