ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮದೇ ಶೈಲಿಯಲ್ಲಿ ಕಾರ್ಯನಿರ್ವಹಿಸುವ ಹಕ್ಕಿದೆ. ನಾನು ಮಾತನಾಡಿದ್ದು ರೈತರ ಸಮಸ್ಯೆಗಳ ದೃಷ್ಟಿಯಿಂದ, ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. ಕೃಷಿ ನನ್ನ ಜಾತಿ, ಕೃಷಿ ನನ್ನ ಧರ್ಮ, ನಾನು ರಾಜಕಾರಣಿಯ ಮಗನಲ್ಲ, ರೈತರ ಹಿತಾಸಕ್ತಿಯ ವಿಷಯ ಬಂದಾಗ ನಾನು ಪೊಲಿಟಿಕಲ್ ಕರೆಕ್ಟ್ ನೆಸ್ ನ ನಿಮಯಗಳನ್ನು ಪಾಲಿಸಲು ಇಚ್ಛಿಸುವುದಿಲ್ಲ, ಇದನ್ನು ಮಾಧ್ಯಮಗಳು ಸರಿಯಾದ ಗ್ರಹಿಕೆಯಿಂದ ವರದಿ ಮಾಡುವುದಿಲ್ಲ ಎಂದು ಸಂಸದ ನಾನಾ ಪಾಟೋಲ್ ಹೇಳಿದ್ದಾರೆ.