ಜನ್-ಧನ್ ಯೋಜನೆ ಜಾರಿಯಾಗುವುದಕ್ಕೂ ಮುನ್ನ ಶೇ.42 ರಷ್ಟು ಕುಟುಂಬಗಳು ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಜೋಡಣೆಯಾಗಿರಲಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ. ಫೈನಾನ್ಷಿಯಲ್ ಇನ್ಕ್ಲೂಷನ್ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅರುಣ್ ಜೇಟ್ಲಿ, ಜನ್-ಧನ್ ಯೋಜನೆ ಜಾರಿಯಾದಾಗಿನಿಂದ ಶೂನ್ಯ ಠೇವಣಿ ಖಾತೆಗಳು ಶೇ.77 ರಿಂದ ಶೇ.20 ಕ್ಕೆ ಇಳಿಕೆಯಾಗಿವೆ. ಒಮ್ಮೆ ನೇರ ಪಾವತಿ ಸೌಲಭ್ಯ ಜಾರಿಯಾದರೆ ಶೇ.20 ರಷ್ಟು ಖಾತೆಗಳೂ ಸಹ ವಹಿವಾಟು ನಡೆಸಲಿವೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ.