ದಿನಕರನ್ ಬೆಂಬಲಿತ 19 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆ ಸ್ಪೀಕರ್ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದರಿಂದ ವಿಶ್ವಾಸಮತಕ್ಕೆ ತಡೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಮೂರ್ತಿ ಎಂ ದುರೈಸಾಮಿ ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಪಳನಿಸ್ವಾಮಿ ಸರ್ಕಾರ ಕೆಳಗಿಳಿಸಲು ಕಾಯುತ್ತಿರುವ ಶಶಿಕಲಾ ಬಣದ ದಿನಕರನ್ ಮತ್ತು ಡಿಎಂಕೆಗೆ ಮುಖಭಂಗವಾಗಿದೆ.