ಅಯೋಧ್ಯೆ: ನಿರ್ಮೋಹಿ ಅಖಾಡಾದ ಮುಖ್ಯಸ್ಥ ಮಹಾಂತ್ ಭಾಸ್ಕರ್ ದಾಸ್ ನಿಧನ

ಅಯೋಧ್ಯೆ ರಾಮ ಜನ್ಮಭೂಮಿಯ ಹಕ್ಕುದಾರ ಸಂಘಟನೆಗಳಲ್ಲಿ ಒಂದಾಗಿರುವ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಭಾಸ್ಕರ್ ದಾಸ್(88) ನಿಧನರಾಗಿದ್ದಾರೆ.
ಅಯೋಧ್ಯೆ(ಸಂಗ್ರಹ ಚಿತ್ರ)
ಅಯೋಧ್ಯೆ(ಸಂಗ್ರಹ ಚಿತ್ರ)
Updated on
ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿಯ ಹಕ್ಕುದಾರ ಸಂಘಟನೆಗಳಲ್ಲಿ ಒಂದಾಗಿರುವ ನಿರ್ಮೋಹಿ ಅಖಾಡಾದ ಮುಖ್ಯಸ್ಥ ಭಾಸ್ಕರ್ ದಾಸ್(88) ನಿಧನರಾಗಿದ್ದಾರೆ. 
ಭಾಸ್ಕರ್ ದಾಸ್ ಅವರಿಗೆ ಮೂರನೇ ಬಾರಿಗೆ ಹೃದಯಾಘಾತ ಸಂಭವಿಸಿದ್ದು, ಈ ಹಿಂದೆ 2003 ಹಾಗೂ 2007 ರಲ್ಲಿ ಹೃದಯಾಘಾತಕ್ಕೊಳಗಾಗಿದ್ದರು. ಹರ್ಷನ್ ಹೃದಯ ಸಂಸ್ಥಾನ್ ಆಸ್ಪತ್ರೆಯ ಐಸಿಯುನಲ್ಲಿ ಭಾಸ್ಕರ್ ದಾಸ್ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಗೋರಖ್ ಪುರದ ರಾಣಿದೀಹ್ ಪ್ರದೇಶದಲ್ಲಿ 1929 ರಲ್ಲಿ ಮಹಾಂತ್ ಭಾಸ್ಕರ್ ದಾಸ್ ಜನ್ಮಿಸಿದ್ದರು. 1946 ರಲ್ಲಿ ಅಯೋಧ್ಯೆಗೆ ಆಗಮಿಸಿದ್ದ ಅವರು 1949 ರಲ್ಲಿ ರಾಮಜನ್ಮಭೂಮಿ ಪ್ರಕರಣದಲ್ಲಿ ಭಾಗಿಯಾಗಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com