ಗುವಾಹಟಿ: ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರಿಗಾಗಿ ಪ್ರಾರ್ಥನ ಸಭೆ ಆಯೋಜಿಸಿದ್ದ ಆರೋಪದ ಮೇಲೆ ಅಸ್ಸಾಂನ ಬಿಜೆಪಿ ಮಹಿಳಾ ನಾಯಕಿಯನ್ನು ಪಕ್ಷ ಅಮಾನತು ಮಾಡಿದೆ.
ಭಾರತೀಯ ಜನತಾ ಮಜ್ದೂರ್ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸದಸ್ಯೆ ಬೆನಜಿರ್ ಅರ್ಫಾನ್ ಅವರು ಮತ್ತೊಂದು ಸಂಸ್ಥೆ ಆಯೋಜಿಸಿದ್ದ ಪ್ರದರ್ಶನಕ್ಕೆ ಜನರನ್ನು ಆಕರ್ಷಿಸಲು ಬಿಜೆಪಿ ಸಾಮಾಜಿಕ ಮಾಧ್ಯಮ ವೇದಿಕೆ ಬಳಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಶೋಕಾಸ್ ನೋಟೀಸ್ ನೀಡಿದೆ.
ಮಾನ್ಮಾರ್ ನಲ್ಲಿ ರೋಹಿಂಗ್ಯ ಮುಸ್ಲಿಂರ ಮೇಲೆ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರಿಗಾಗಿಎನ್ಜಿಒ ಯುನೈಟೆಡ್ ಮೈನಾರಿಟಿ ಪೀಪಲ್ಸ್ ಫೋರಂ ಪ್ರಾರ್ಥನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ನಾನು ತ್ರಿವಳಿ ತಾಲಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದಲ್ಲಿ ನಿಂತಿದ್ದೆ. ಇದೀಗ ಪಕ್ಷ ವಿವರಿಸಲು ಅವಕಾಶ ನೀಡದೆ ನನಗೆ ತಲಾಕ್ ನೀಡಿದೆ ಎಂದು ಅರ್ಫಾನ್ ಹೇಳಿದ್ದಾರೆ.
ರೋಹಿಂಗ್ಯ ಮುಸ್ಲಿಂರ ಸಮಸ್ಯೆ ಕುರಿತಂತೆ ಯಾವುದೇ ಮಾಹಿತಿ ನೀಡದೇ ಪಕ್ಷದ ಪೂರ್ವಾನುಮತಿ ಪಡೆಯದೇ ಪಕ್ಷದ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಬಳಸಿದ್ದರಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್ ಸೈಕಿಯ ಬೆನಜಿರ್ ರ ಅಮಾನತು ಆದೇಶಕ್ಕೆ ಸಹಿ ಹಾಕಿದ್ದಾರೆ.