ಪ್ರಕರಣ ಪ್ರಮುಖ ಆರೋಪಿ ಲೆ.ಕರ್ನಲ್ ಪ್ರಸಾದ್ ಪುರೋಹಿತ್ ಹಾಗೂ ಸಾದ್ವಿ ಪ್ರಗ್ಯಾ ಸಿಂಗ್ ಥಾಕೂರ್ ನಂತರ ಮತ್ತಿಬ್ಬರೂ ಆರೋಪಿಗಳಾದ ಸುಧಾಕರ್ ಚತುರ್ವೇದಿ ಹಾಗೂ ಸುಧಾಕರ್ ದ್ವಿವೇದಿ ಅವರಿಗೆ ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಇದರೊಂದಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ 14 ಆರೋಪಿಗಳ ಪೈಕಿ 11 ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇನ್ನು ಕೇವಲ ಮೂವರು ಮಾತ್ರ ಜೈಲು ಹಕ್ಕಿಗಳಾಗಿದ್ದಾರೆ.